Sunday 13 March 2016

Nice article

ಮೂತ್ರಪಿಂಡ ಸಂರಕ್ಷಣೆಗೆ ಸುವರ್ಣಸೂತ್ರ

10 Mar 2016

ಕಿಡ್ನಿ ಸಮಸ್ಯೆ ಸರ್ಕಾರಕ್ಕೂ ಸವಾಲು

ಜೀವನಶೈಲಿ, ಮಧುಮೇಹ ಮತ್ತು ರಕ್ತದ ಒತ್ತಡ ಕಾಯಿಲೆಗಳಿಂದ ಕಿಡ್ನಿ ವೈ ಫಲ್ಯ ಪ್ರಕರಣಗಳು ಹೆಚ್ಚುತ್ತಿವೆ. ಬೇಡಿಕೆಗೆ ಅನುಗುಣವಾಗಿ ಡಯಾಲಿಸಿಸ್ ಘಟಕ ಸ್ಥಾಪನೆ ಸರ್ಕಾರಕ್ಕೆ ಸವಾಲಾಗಿದೆ.ನಗರದಂತೆ ಗ್ರಾಮೀಣ ಪ್ರದೇಶದ ಜನರಲ್ಲೂ ಕಿಡ್ನಿ ವೈ ಫಲ್ಯತೆ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ತೀವ್ರ ತರದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ವಾರದಲ್ಲಿ 2 ರಿಂದ 3 ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕಾಗುತ್ತದೆ. ರೋಗಿಗಳ ಅನುಪಾತಕ್ಕೆ ಹೋಲಿಸಿದರೆ ಈಗಿರುವ ಡಯಾಲಿಸಿಸ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವುದು ಕಷ್ಟವಾಗಿದೆ.

ಕಿಡ್ನಿ ಬಗ್ಗೆ ಇಂದು ಮಾತ್ರ ಯೋಚಿಸಿದರೆ ಖಂಡಿತಾ ಸಾಲದು ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಒತ್ತಡದ ಹಾಗೂ ಬದಲಾಗುತ್ತಿರುವ ಜೀವನ ಮತ್ತು ಆಹಾರಶೈಲಿಯಿಂದಾಗಿ ಹೆಚ್ಚಿನವರಲ್ಲಿ ಮೂತ್ರಪಿಂಡ (ಕಿಡ್ನಿ) ಸಮಸ್ಯೆಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪ್ರತಿದಿನವೂ ಕಿಡ್ನಿ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯ ಹೆಚ್ಚಾಗಿದೆ. ಮೂತ್ರಪಿಂಡದ ಮೇಲೊಂದು ಕ್ಷ-ಕಿರಣ.

ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು ಅನೇಕ ಮಹತ್ತರ ಕಾರ್ಯಗಳನ್ನು ಮಾಡುವ ಅದ್ಭುತ ಹಾಗೂ ಸಂಕೀರ್ಣ ಅಂಗ ಮೂತ್ರಪಿಂಡ (ಕಿಡ್ನಿ). ರಕ್ತದಲ್ಲಿನ ತ್ಯಾಜ್ಯ, ವಿಷಕಾರಿ ಪದಾರ್ಥ ಹಾಗೂ ಹೆಚ್ಚುವರಿ ನೀರನ್ನು ಹೊರಹಾಕುವುದು ಇದರ ಪ್ರಮುಖ ಕಾರ್ಯ. ರಕ್ತದೊತ್ತಡ ನಿಯಂತ್ರಿಸಲು, ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಹಾಗೂ ಮೂಳೆಗಳನ್ನು ಆರೋಗ್ಯಕರವಾಗಿಡಲು ಕೂಡ ಮೂತ್ರಪಿಂಡ ನೆರವಾಗುತ್ತದೆ.ರಕ್ತದೊತ್ತಡ ಸದಾಕಾಲ ಸಮಪ್ರಮಾಣದಲ್ಲಿರುವಂತೆ ನಮ್ಮ ದೇಹದಲ್ಲಿನ ಉಪ್ಪು ಹಾಗೂ ನೀರನ್ನು ಬಹುಎಚ್ಚರಿಕೆಯಿಂದ ಮೂತ್ರಪಿಂಡವು ನಿಯಂತ್ರಿಸುತ್ತದೆ.

ಮಧುಮೇಹ, ತೀವ್ರ ರಕ್ತದೊತ್ತಡ ಹಾಗೂ ಮೂತ್ರಪಿಂಡದ ಹರಳುಗಳಿಂದಾಗಿ ಮೂತ್ರಪಿಂಡ ಹಾನಿಯಾಗುವ ಸಂಭವ ಹೆಚ್ಚು. ಮಧುಮೇಹದ ರೀತಿಯಲ್ಲಿಯೇ ಮೂತ್ರಪಿಂಡದ ಹರಳುಗಳು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಶೇ.12 ಪುರುಷರು ಹಾಗೂ ಶೇ.7 ಮಹಿಳೆಯರಲ್ಲಿ ಮೂತ್ರಪಿಂಡದ ಹರಳುಗಳು ಕಂಡುಬರುತ್ತವೆ. ಬೊಜ್ಜಿನಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲೂ ಈ ಹರಳುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅಧಿಕ ಮಾಂಸಾಹಾರ ಸೇವನೆಯಿಂದಲೂ ಹರಳುಗಳು ಉಂಟಾಗುತ್ತವೆ. ಹೆಚ್ಚು ಉಪ್ಪಿನಂಶವಿರುವ ಆಹಾರ ಪದಾರ್ಥಗಳ ಸೇವನೆ ಕೈಬಿಡುವ ಮೂಲಕ ಹರಳು ಉಂಟಾಗುವುದನ್ನು ನಿಯಂತ್ರಿಸಬಹುದಾಗಿದೆ.

ಚಿಕಿತ್ಸಾ ವಿಧಾನ: ಮೂತ್ರ ವಿಸರ್ಜನೆ ವೇಳೆ ನೋವು ಅಥವಾ ರಕ್ತ ಕಾಣಿಸಿಕೊಳ್ಳುವುದು ಮೂತ್ರಪಿಂಡದ ಹರಳು ಆಗಿರುವುದರ ಪ್ರಮುಖ ಲಕ್ಷಣ. 4 ಮಿ.ಮೀ.ಗಿಂತ ಕಡಿಮೆ ಗಾತ್ರದ ಹರಳುಗಳಿದ್ದರೆ ಸಾಮಾನ್ಯವಾಗಿ ಮೂತ್ರದ ಮೂಲಕ ಅವುಗಳನ್ನು ಹೊರಹೋಗುವಂತೆ ಔಷಧ ನೀಡಲಾಗುತ್ತದೆ. ಗಾತ್ರ ಸಣ್ಣದಾಗಿದ್ದರೆ, ಶಾಕ್ ವೇವ್ ಲಿತೊಟ್ರಿಪ್ಸಿ ಚಿಕಿತ್ಸೆ ನೀಡಲಾಗುತ್ತದೆ. ಎರಡನೆಯದು ಯುರಿಟೆರೊಸ್ಕೊಪಿ. ಮೂತ್ರ ವಿಸರ್ಜನಾ ನಾಳದ ಮೂಲಕ ದರ್ಶಕಯಂತ್ರ ಕಳುಹಿಸಿ ಹರಳುಗಳನ್ನು ಒಡೆದುಹಾಕಲಾಗುತ್ತದೆ.ದೊಡ್ಡ ಗಾತ್ರದ ಹರಳುಗಳನ್ನು ಎಂಡೊಸ್ಕೊಪಿಕ್ (ಅಂತರ್‌ದರ್ಶಕೀಯ) ಶಸಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಆದರೆ, ಹೋಲಿಯಂ ಲೇಸರ್ ಮೂಲಕ ಹರಳುಗಳನ್ನು ಒಡೆಯುವುದು ಇತ್ತೀಚಿನ ಆಧುನಿಕ ಚಿಕಿತ್ಸೆಯಲ್ಲಿ ಹೆಚ್ಚು ಪ್ರಚಲಿತವಾಗಿದೆ.

ಆಹಾರ ಶೈಲಿ ಮೇಲೆ ನಿಗಾ ಇರಲಿ

        ದೇಹವನ್ನು ಸುಸ್ಥಿತಿಯಲ್ಲಿ, ಸಕ್ರಿಯವಾಗಿಟ್ಟುಕೊಳ್ಳಬೇಕು.

          ರಕ್ತದ ಸಕ್ಕರೆಮಟ್ಟವನ್ನು ಸದಾ ನಿಯಂತ್ರಣ ದಲ್ಲಿಟ್ಟುಕೊಳ್ಳಬೇಕು.

          ರಕ್ತದೊತ್ತಡದ ಮೇಲೆ ನಿಗಾ ವಹಿಸಬೇಕು.

          ಆರೋಗ್ಯಪೂರ್ಣ ಆಹಾರ ಸೇವಿಸಬೇಕು.

          ದೇಹದ ತೂಕವನ್ನು ನಿಯಂತ್ರಣದಲ್ಲಿಡಬೇಕು.

          ದ್ರವ ಸೇವನೆ ನಿಯಮಿತವಾಗಿರುವಂತೆ ನೋಡಿಕೊಳ್ಳಬೇಕು.

          ಧೂಮಪಾನ ಮಾಡಬಾರದು.

          ಅನಗತ್ಯವಾಗಿ, ನಿರಂತರವಾಗಿ ಮಾತ್ರೆಗಳ ಸೇವನೆ ಮಾಡಬಾರದು.

ಮಾರ್ಚ್ 10 ವಿಶ್ವ ಮೂತ್ರಪಿಂಡ ದಿನ

ಹುಬ್ಬಳ್ಳಿಯ ಮೂತ್ರಶಾಸಜ್ಞ ಡಾ.ಅಶ್ವಿನ್ ಕುಲಕರ್ಣಿ ಅವರು ಕಿಡ್ನಿಯ ಮಹತ್ವ, ಕಾರ್ಯವೈಖರಿಯನ್ನು ಇಲ್ಲಿ ವಿವರಿಸಿದ್ದಾರೆ.

ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆ, ಸಿಗುತ್ತಿಲ್ಲ ಡಯಾಲಿಸಿಸ್

ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 65 ಡಯಾಲಿಸಿಸ್ ಕೇಂದ್ರ ಸಹಸ್ರಾರು ಬಡರೋಗಿಗಳ ಪರದಾಟವಿಲಾಸ ಮೇಲಗಿರಿ ರಾಜ್ಯದಲ್ಲಿ ಕಿಡ್ನಿ ಸಮಸ್ಯೆ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಆದರೆ ಬಡವರ ನೆರವಿಗೆ ಬರಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿರುವುದೇ ಕೇವಲ 65 ಡಯಾಲಿಸಿಸ್ ಕೇಂದ್ರಗಳು ಮಾತ್ರ.ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕಿಡ್ನಿ ವೈ ಫಲ್ಯಕ್ಕೆ ಒಳಗಾಗಿದ್ದು, ಇವರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಒಟ್ಟು 220 ಡಯಾಲಿಸಿಸ್ ಕೇಂದ್ರಗಳಿವೆ. ಆದರೆ ಇವು ಸಾಕಾಗುತ್ತಿಲ್ಲ.

ಸಿಗುತ್ತಿಲ್ಲ ಚಿಕಿತ್ಸೆ: ನಾನಾ ಕಾರಣಗಳಿಂದ ಕಿಡ್ನಿ ವೈ ಫಲ್ಯಗೊಂಡ ರೋಗಗಳ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿದೆ. ಈ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಡಯಾಲಿಸಿಸ್ ಕೇಂದ್ರಗಳಿಲ್ಲ. ಇರುವ ಬಹುತೇಕ ಘಟಕಗಳು ಖಾಸಗಿ ಸ್ವತ್ತಾಗಿವೆ. ಹಾಗಾಗಿ ಬಡ ರೋಗಿಗಳಿಗೆ ಚಿಕಿತ್ಸೆ ಬಲು ದೂರವಾಗಿದೆ.21 ಜಿಲ್ಲಾ, 9 ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ 35 ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕಗಳು ತಲಾ 10 ಹಾಸಿಗೆಗಳನ್ನು ಹೊಂದಿವೆ. ಆದರೆ, ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 2ರಿಂದ 4 ಹಾಸಿಗೆಗಳಿವೆ.

ನೋಂದಣಿಗೆ ಕಾಯಲೇಬೇಕು: ಕಡಿಮೆ ಡಯಾಲಿಸಿಸ್ ಘಟಕ ಹಾಗೂ ಹಾಸಿಗೆಯಿಂದಾಗಿ ಕಿಡ್ನಿ ವೈ ಫಲ್ಯಕ್ಕೆ ಒಳಗಾದ ರೋಗಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿ ಚಿಕಿತ್ಸೆಗಾಗಿ ಕಾಯಬೇಕಾದ ಪರಿಸ್ಥಿತಿ ತಲೆದೋರಿದೆ.146 ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳಿದ್ದು, ಈ ಪೈಕಿ 35ನ್ನು ಹೊರತುಪಡಿಸಿದರೆ, ಉಳಿದ 111 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಬೇಕಿದೆಪ್ರತಿನಿತ್ಯ ಬಹುತೇಕ 560-600 ರೋಗಿಗಳು ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಿಗೆ ಭೇಟಿಕೊಡುತ್ತಾರೆ. ಮತ್ತೆ ಕೆಲವರು ಖಾಸಗಿಡಯಾಲಿಸಿಸ್ ಕೇಂದ್ರಗಳ ಮೊರೆ ಹೋಗುತ್ತಾರೆ. ದುಬಾರಿ ವೆಚ್ಚ ಭರಿಸದೆ ಅನೇಕ ರೋಗಿಗಳು ಚಿಕಿತ್ಸೆಯಿಂದ ದೂರವೇ ಉಳಿದಿದ್ದಾರೆ.

1 ಹಾಸಿಗೆಗೆ 10 ಲಕ್ಷ ರೂ. ವೆಚ್ಚ

ಡಯಾಲಿಸಿಸ್‌ನ ಒಂದು ಹಾಸಿಗೆಗೆ ಸರ್ಕಾರ 10 ಲಕ್ಷ ರೂ. ವ್ಯಯಿಸಬೇಕಿದೆ. ಒಂದು ಬಾರಿಯ ಡಯಾಲಿಸಿಸ್‌ಗೆ ಕನಿಷ್ಠ 4 ಗಂಟೆ ಸಮಯ ಬೇಕಾಗುತ್ತದೆ. 10 ಯಂತ್ರಗಳನ್ನು ಒಳಗೊಂಡ ಡಯಾಲಿಸಿಸ್ ಕೇಂದ್ರಗಳಲ್ಲಿ ದಿನಕ್ಕೆ 25-30 ರೋಗಿಗಳನ್ನು ಮಾತ್ರ ಚಿಕಿತ್ಸೆಗೆ ಒಳಪಡಿಸಬಹುದು.

ಕೇಂದ್ರ ಆರಂಭಕ್ಕೆ ನಿರ್ಧಾರ

2016-17ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಜಿಲ್ಲೆಗೆ ಒಂದು ತಾಲೂಕು ಆಯ್ಕೆ ಮಾಡಿಕೊಂಡು ಅಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಡಯಾಲಿಸ್ ಕೇಂದ್ರವನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.

ಹಾಸಿಗೆ ಹೆಚ್ಚಳಕ್ಕೂ ಚಿಂತನೆ

ತಾಲೂಕು ಘಟಕಗಳಲ್ಲಿ ಪ್ರಸ್ತುತ 2 ರಿಂದ 4 ಹಾಸಿಗೆಗಳಿದ್ದು, ಇಲ್ಲಿ ಹಾಸಿಗೆ ಹೆಚ್ಚಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ.ವಾಮದೇವ್ ತಿಳಿಸಿದ್ದಾರೆ.

ದುಬಾರಿ ದರ ಕಾಸಿಲ್ಲದವರಿಗೆ ಜ್ವರ

ಒಂದು ಬಾರಿ ಡಯಾಲಿಸಿಸ್‌ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 600-700 ರೂ.ವರೆಗೆ ಹಣ ಪಾವತಿಸಬೇಕಾ ಗುತ್ತದೆ. ಆದರೆ, ಇದೇ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು 1,500 ರಿಂದ 2 ಸಾವಿರ ರೂ.ವರೆಗೆ ಶುಲ್ಕ ಪಡೆಯುತ್ತಿವೆ. ಇದು ಬಡವರಿಗೆ ಹೊರೆಯಾಗಿದೆ.

ನೆಪ್ರೋಯುರಾಲಜಿಸ್ಟ್‌ಗಳ ಕೊರತೆ

ಸರ್ಕಾರ ಬರೀ ಡಯಾಲಿಸಿಸ್ ಕೇಂದ್ರ ತೆರೆದರೆ ಪ್ರಯೋಜನವಾಗುವುದಿಲ್ಲ.ನೆಪ್ರೋಯುರಾಲಜಿಸ್ಟ್‌ಗಳ ಕೊರತೆ ರಾಜ್ಯವನ್ನು ತೀವ್ರವಾಗಿ ಕಾಡುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 100 ಮಂದಿ ಮಾತ್ರ ನೆಪ್ರೋಯುರಾಜಲಿಸ್ಟ್‌ಗಳಿದ್ದಾರೆ. ಈ ಕೊರತೆ ನೀಗಿಸಲು ಸರ್ಕಾರ ಹೆಣಗಬೇಕಿದೆ.

PREVIOUS

ಜಾಹಿರಾತು 11-3

NEXT

ಒಂದೇದಿನ 11.86 ಕೋಟಿ ತೆರಿಗೆ ಸಂಗ್ರಹ

No comments:

Post a Comment

Listen Music